ವರ್ಷಾ ಬಂತು ಹರುಷ ತಂತು
ಎಲ್ಲರೆದೆಯಲಿ
ಹಸಿರು ತುಂಬಿ ಉಸಿರು ಬಂತು
ಭೂಮಿಯ ಮೊಗದಲಿ
ಹನಿ ಹನಿ ಮುತ್ತಾಗಿ ಚೆಲ್ಲಿ
ಧರೆಗಿಳಿದು ಹಾರವಾಗಿ
ಕಡಲ ಕೊರಳ ಬಳಸಲೆಂದು
ವಧುವಂತೆ ನಾಚುತ ಬಂತು
ಹೊಳೆ ಹಳ್ಳ ಕೆರೆ ತುಂಬಿ ತುಳುಕಿ
ಬೆಟ್ಟ ಬಯಲು ಜಲಪಾತ ಬಳುಕಿ
ಬರಡು ನೆಲವ ತಣಿಸಲೆಂದು
ಭೋರ್ಗರೆಯುತ ಹರಿದು ಬಂತು.
ಜೀವಕೋಟಿಗೆಲ್ಲಾ ಜಳಕ
ಆನಂದದಿ ಇಳೆಗೆ ಪುಳಕ
ಜಗದ ಕೊಳೆಯ ತೊಳೆಯಲೆಂದು
ಆಗಸದಿ ಆಡುತ ಬಂತು.
ಟಪ್ ಟಪ್ ಆಲಿಕಲ್ಲು
ದಿಗಂತದೆ ಕಾಮನಬಿಲ್ಲು
ರುದ್ರ ರಮಣೀಯ ಸೊಲ್ಲು
ಬಿಂಕದಿಂದ ಇಳಿದು ಬಂತು
ಗುಡುಗು ಸಿಡಿಲು ಮಿಂಚಿನ ಆರ್ಭಟ
ಭಯವರಿಯದ ಚಿನ್ನರಾಟ
ಮೈಮನಕೆ ಜಡತೆ ತುಂಬಿ
ಆಮೋದದೆ ಹರಿದು ಬಂತು.
*****
Related Post
ಸಣ್ಣ ಕತೆ
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…
-
ನಂಟಿನ ಕೊನೆಯ ಬಲ್ಲವರಾರು?
ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…
-
ಕಲಾವಿದ
"ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…
-
ಆನುಗೋಲು
ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…
-
ಒಲವೆ ನಮ್ಮ ಬದುಕು
"The best of you is he who behaves best towards the members of his family" (The Holy Prophet) ವಾರದ ಸಂತೆ.… Read more…